ಅಭಿಪ್ರಾಯ / ಸಲಹೆಗಳು

ದೂರು ನೀಡುವ ವಿಧಾನ

ದೂರು ನೀಡುವ ವಿಧಾನ

ದೂರು ನೀಡುವ ಮೊದಲು ಗಮನಿಸಬೇಕಾದ ಅಂಶಗಳು.

ಎಲ್ಲಾ ದೂರುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು. ಯಾವುದೇ ಪಕ್ಷ ಒಳಗೊಂಡಿದ್ದರೂ, ಪೊಲೀಸ್ರ ಕಾರ್ಯನಿರ್ವಹಣೆಯ ಅಥವಾ ಅವರ ವರ್ತನೆಯ ಬಗ್ಗೆಗಿನ ದೂರು ಅಹಿತಕರವೆನಿಸಿದರೂ, ಎಲ್ಲಾ ದುರುಗಳನ್ನು ಕ್ರಮವಾದ, ನ್ಯಾಯವಾದ ರೀತಿಯಲ್ಲಿ ನಡೆಸುವುದು ಮುಖ್ಯವಾಗಿರುತ್ತದೆ. ಕಾರ್ಯನಿರ್ವಹಣೆಯ ಕುಂದುಕೊರತೆಗಳನ್ನು ಎತ್ತಿಹೇಳುವುದರಿಂದ, ತಪ್ಪುಗಳನ್ನು ಸರಿಪಡಿಸಿ ಮುಂದೆ ತಿದ್ದುಕೊಳ್ಳಲು ನೆರವಾಗುತ್ತದೆ.

ಪೊಲೀಸ್ ಅಧಿಕಾರಿ ಅಥವಾ ಸಾರ್ವಜನಿಕರ ವಿರುದ್ಧದ ದೂರನ್ನು ನಡೆಸಲು ಸ್ಪಷ್ಟವಾದ ವಿಧಾನವಿದೆ. ಪೊಲೀಸ್ ಅಧಿಕಾರಿಗಳ ವಿರುದ್ಧದ ದೂರನ್ನು ದೂರಿನ ಇಲಾಖೆಯಲ್ಲೂ ಮತ್ತು ಚಾಮರಾಜನಗರ ಸಾರ್ವಜನಿಕರ ದೂರನ್ನು ಪೊಲೀಸ್ ಠಾಣೆಯ ಮುಖ್ಯಾಧಿಕಾರಿಯವರು ನೋಡಿಕೊಳ್ಳುತ್ತಾರೆ/ನಿರ್ವಹಿಸುತ್ತಾರೆ. ಪೊಲೀಸ್ ನಿರೀಕ್ಷಕರ ವಿರುದ್ಧದ ಯಾವುದೇ ದೂರನ್ನು ಮೈಸುರು ನಗರ ಪೊಲೀಸ್ ಆಯುಕ್ತರೆದುರು ಧ್ವನಿ ಏರಿಸಬೇಕು.

ನಾನು ದೂರು ನೀಡಬಹುದೇ?

ಪೊಲೀಸ್ ಅಧಿಕಾರಿಯ ವರ್ತನೆ ತಪ್ಪು ಅಥವಾ ಅನ್ಯಾಯ ಎಂದು ಅನಿಸಿದರ, ದೂರು ಸಲ್ಲಿಸುವ ಹಕ್ಕನ್ನು ಹೊಂದಿರುತ್ತೀರಿ. ಮೊದಲು ಏನು ದೂರು ನೀಡಬೇಕೆಂದು ನಿರ್ಧರಿಸಿ, ಉದಾ: ನಿಮ್ಮೊಡನೆ ಅವರು ಕಟುವಾಗಿ ವರ್ತಿಸಿದರೆ, ಕಟುವಾಗಿದ್ದರೆ? ಅವರು ಅಧಿಕ ಬಲ ಉಪಯೋಗಿಸಿದರೆ? ಕಾನೂನು ಬಾಹಿರವಾಗಿ ದಸ್ತಗಿರಿ ಮಾಡಿದರೂ ? ನಿಮ್ಮ ಹಕ್ಕುಗಳ ದುರುಪಯೋಗ ನಡಿಯಿತೆ? ಇಂತಹ ಎಲ್ಲಾ ಅಥವಾ ಕೆಲವು ಸಂದರ್ಭಗಳಲ್ಲಿ ನೀವು ದೂರು ಸಲ್ಲಿಸಲು ಅರ್ಹರು.

ಅಂಶಪಟ್ಟಿ(CHECKLIST):

ನನ್ನ ದೂರಿನಲ್ಲಿ ಏನು ಇರಬೇಕು?

  • ಯಾವಾಗ ಘಟನೆ ನಡೆಯಿತು?
  • ಹೇಗೆ ನಡೆಯಿತು?
  • ಏನು ಆಯ್ತು?
  • ಏನು ಹೇಳಿದರು?
  • ನೀವು ಮತ್ತು ಅಧಿಕಾರಿಗಳನ್ನು ಹೊರತುಪಡಿಸಿ, ಬೇರೆ ಯಾವುದಾದರು ಸಾಕ್ಷಿಗಳಿವೆಯೆ?
  • ಸಾಕ್ಷಿಗಳನ್ನು ಎಲ್ಲಿ ಸಂಪರ್ಕಿಸಬಹುದು.
  • ಅಪಘಾತ ಅಥವಾ ಗಾಯ ಸಂಬಂಧಿಸಿದಂತೆ ಏನು ಪುರಾವೆಗಳಿವೆ?

ದೂರನ್ನು ನಾನು ಹೇಗೆ ಮಾಡಬಹುದು?

ನೀವು ಯಾವುದೇ ಪೊಲೀಸ್ ಠಾಣೆಗೆ ಹೋದರೂ, ಅಲ್ಲಿ ಕೆಲಸ ಮೇಲಿರುವ ಪೊಲೀಸ್ ಅಧಿಕಾರಿಯನ್ನು ಕಾಣಬಹುದು. ಅವರು ಪ್ರಾಯಶ: ಸಬ್ಇನ್ಸ್ಪೆಕ್ಟರ್ ಆಗಿರುತ್ತಾರೆ. ಅವರು, ನೀವು ಕೊಡಲು ಹೊರಟಿರುವ ದೂರಿಗೆ ಆಧಾರವಿದೆಯೇ ಎಂದು ತಿಳಿಸುವರು. (ನೀವು ದೂರನ್ನು ವಕೀಲರು, ಯಾರಾದರೂ) ನಿಮ್ಮ ದೂರನ್ನು ವಕೀಲರೋ ಇಲ್ಲವೆ ಬೇರೆ ಯಾರಾದರೂ ಮೂಲಕನಾದರೂ ದೂರನ್ನು ನೀಡಬಹುದು. ಉದಾ: ವಕೀಲರು, ಸ್ನೇಹಿತರು ಅಥವಾ ಅಕ್ಕಪಕ್ಕದವರು ಇವರ ಹತ್ತಿರ ನೀವು ಕೊಟ್ಟಿರುವ ಅಧಿಕಾರತ್ವದ ಪತ್ರ ಇರಬೇಕು.

ನನ್ನ ದೂರು ಏನಾಗಬಹುದು?

ಪೊಲೀಸ್ ಮೇಲೆ ನೀವು ದೂರನ್ನು ಸಲ್ಲಿಸಿದಲ್ಲಿ, ಅದನ್ನು ನೊಂದಾಯಿಸ ಬೇಕೋ ಬೇಡವೋ ಎಂಬುದನ್ನು ಅವರೇ ನಿರ್ಧರಿಸ ಬೇಕು.

ಕಡಿಮೆ ಗಂಭೀರದ ದೂರುಗಳು

ವಿವರಣೆ ಅಥವಾ ಕ್ಷಮಾ ಪ್ರಾರ್ಥನದಿಂದ ನಿಮಗೆ ಸಮಾಧಾನವಾಗುವಂತಿದ್ದರೆ, ಅಂತಹ ದೂರುಗಳನ್ನು ಪೊಲೀಸರು ಅನೌಪಚಾರಿಕವಾಗಿ ಪರಿಹರಿಸಬಹುದು.

ಗಂಭೀರ ದೂರುಗಳು

ಅನೌಪಚಾರಿಕ ರೀತಿ ನಿಮಗೆ ಒಪ್ಪಿಗೆಯಿಲ್ಲದಿದ್ದಲ್ಲಿ ಅಥವಾ ಆರೋಪದ ಗಂಭೀರತೆ ತೀವ್ರಗೊಂಡಲ್ಲಿ ಅಂತಹ ದೂರುಗಳನ್ನು ಪೂರ್ಣವಾಗಿ ಹಿರಿಯ ಪೊಲೀಸ್ ಅಧಿಕಾರಿ ಪರಿಶೀಲಿಸುತ್ತಾರೆ. ಹೆಚ್ಚಿನ ತೀವ್ರತೆವುಳ್ಳ ದೂರುಗಳು ದಾಖಲೆಯಾದ ಆದ ತಕ್ಷಣ, ಮೇಲ್ಪಟ್ಟ ಅಧಿಕಾರಿಗಳು ಅದನ್ನು ಪೊಲೀಸ್ ಅಧೀಕ್ಷಕರಿಗೆ ತಿಳಿಯಪಡಿಸಬೇಕು.

ಮೇಲ್ವಿಚಾರಕ ವಿಷಯ: (ಅಧಿಕಾರಿ ವರ್ಗದ ಅಂಗೀಕೃತದಿಂದ ತನಿಖಾಧಿಕಾರಿ ನೇಮಕಗೊಳ್ಳುತ್ತಾರೆ).

ತನಿಖಾಧಿಕಾರಿಯ ನೇಮಕವನ್ನು ಅಧಿಕಾರಿ ವರ್ಗವು ಅಂಗೀಕರಿಸುತ್ತದೆ. ತನಿಖೆ ಹೇಗೆ ಮುಂದುವರಿಸಬೇಕೆಂದು ನಿರ್ಧರಿಸುತ್ತದೆ. ಎಲ್ಲಾ ಹೇಳಿಕೆ ಹಾಗೂ ಪುರಾವೆ ಸಾಕ್ಷಿಗಳನ್ನು ಓದುತ್ತದೆ. ಅಂತಿಮವಾಗಿ ವರದಿ ಪಡೆದ ಅಧಿಕಾರಿ ವರ್ಗ ತನಿಖೆ ನೆಡೆದ ರೀತಿ ಸಮಾಧಾನಕರವೇ, ಇಲ್ಲವೇ ಎಂದು ತಿಳಿಸುತ್ತದೆ.

ತನಿಖೆಯ ನಂತರ ಏನಾಗುತ್ತದೆ?

ಪೋಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಪೋಲೀಸ್ ಅಧಿಕಾರಿಗಳ ಮೇಲೆ ಅಪರಾಧದ ಅಪವಾದ ಹೇರಬೇಕೆ? ಎಂದು ನಿರ್ಧರಿಸುತ್ತಾರೆ.

ಪೋಲೀಸ್ ದೂರು ಅಧಿಕಾರ ವರ್ಗ, ಪೋಲೀಸ್ ಅಧಿಕಾರಿಯ ಮೇಲೆ ಅಯೋಗ್ಯ ವರ್ತನೆ ನಡಾವಳಿಯನ್ನು ಮುಂದುವರಿಸಬೇಕೇ ಎಂಬ ತಿರ್ಮಾನ ತೆಗೆದುಕೊಳ್ಳುತ್ತಾರೆ. ಅಧಿಕಾರಿಯಿಂದ ನಡೆತೆಯ ನಿಯಮದ ಕಾನೂನುಭಂಗ ಆಗಿದೆ ಎಂದು ಸಾಬೀತಾದಲ್ಲಿ ಮಾತ್ರ ಕಾರ್ಯ ಮುಂದುವರೆಯುವುದು.

ಅಸಭ್ಯ ವರ್ತನೆ ಇದ್ದಲ್ಲಿ, ಅದು ನಿಮಗೆ ಪೋಲೀಸರು ತಿಳಿಯಪಡಿಸುತ್ತಾರೆ. ನಿಮ್ಮನ್ನು ಭಾಗವಹಿಸುವುದಕ್ಕೆ ಹೇಳಬಹುದು. ನೀವು ಅತ್ಯಂತ ಮುಖ್ಯವಾದ ಸಾಕ್ಷಿ ಆಗಬಹುದು.

ಯಾವ ಪ್ರಕ್ರಿಯೆಯನ್ನು ತೆಗೆದುಕೊಳ್ಳದೆ,ಅಧಿಕಾರಿಗೆ ಔಪಚಾರಿಕವಾಗಿ ಎಚ್ಚರಿಕೆ ಅಥವಾ ತಿಳುವಳಿಕೆ ನೀಡಬಹುದು.

ನಾನು ಮುಂದೆ ಸಹಕರಿಸದಿದ್ದರೆ ಏನಾಗಬಹುದು?

ನೀವು ಜ್ಞಾಪಕದಲ್ಲಿಡ ಬೇಕಾದ್ದದು ಏನೆಂದರೆ, ಸಹಕರಿಸಲು ವಿಫಲರಾದಲ್ಲಿ ಅಂದರೆ ಹೇಳಿಕೆ ನೀಡುವುದನ್ನು ನಿರಾಕರಿಸಿದಲ್ಲಿ, ನಿಮ್ಮ ದೂರನ್ನು ತನಿಖೆ ಮಾಡಲಾಗುವುದಿಲ್ಲ. ಜಿಲ್ಲಾ ಪೋಲೀಸ್ ಇಲಾಖೆ ಎಂತಹ ಸಂಸ್ಥೆಯೆಂದರೆ, ಸಾರ್ವಜನಿಕರಿಂದ ಪೋಲೀಸ್ ಅಧಿಕಾರಿಯ ನಡತೆಯ ಬಗ್ಗೆ ಏನಾದರೂ ಪಿರ್ಯಾದು ಬಂದಲ್ಲಿ, ಅದನ್ನು ಕೂಲಂಕುಷವಾಗಿ ಎಲ್ಲಕ್ಕಿಂತ ಹೆಚ್ಚಾಗಿ ನ್ಯಾಯವಾದ ರೀತಿಯಲ್ಲಿ ವ್ಯವಹರಿಸಲಾಗುವುದು. ಸರಿಯಾದ ರೀತಿಯಲ್ಲಿ ತನಿಖೆ ಆಗುತ್ತಿದೆಯೇ ಎಂದು ಎಲ್ಲಾ ವರದಿಗಳನ್ನು ತಪಾಸಣೆ ಮಾಡಿ ಖಚಿತ ಪಡಿಸಿಕೊಳ್ಳಲಾಗುವುದು. ಅಧಿಕಾರವರ್ಗವು ಯಾವುದೇ ಪಕ್ಷವಹಿಸದೆ, ಮತ,ಲಿಂಗ ಬೇದ ನೋಡದೆ, ಸಮಾಜದಲ್ಲಿರುವ ವಿವಿಧತೆಯನ್ನು ಗಮನದಲ್ಲಿಟ್ಟು ಕೊಂಡು ಎಲ್ಲಾ ಸಂಗತಿ/ವಿಷಯವನ್ನು ನಿರ್ವಹಿಸುತ್ತದೆ.

ಮಾಹಿತಿ ಹಕ್ಕು

  • ಸಂಸ್ಥೆಯ ವಿವರಗಳು
  • ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಅಧಿಕಾರ ಮತ್ತು ಕರ್ತವ್ಯಗಳು
  • ನಿರ್ಣಯ ತೆಗೆದುಕೊಳ್ಳವ ಪ್ರಕ್ರಿಯೆಯಲ್ಲಿ ಅನುಸರಿಸಲಾದ ವಿಧಿ ವಿಧಾನಗಳು ಕರ್ತವ್ಯ ಪಾಲನೆಗಾಗಿ ಅಳತೆಗೋಲು
  • ಕರ್ತವ್ಯ ಪಾಲನೆಗೆ ಅನುಸರಿಸಿದ ನಿಯಮ, ಭೋದನೆ, ಕೈಪಿಡಿ ಹಾಗೂ ದಾಖಲೆಗಳು. ತನ್ನ ನಿಬಂಧದಲ್ಲಿ ಇರಿಸಲು ಹಿಡಿದಿರುವಂತ ದಾಖಲೆ ವರ್ಗಗಳ ವರದಿ.
  • ರಚನಾತ್ಮಕ ನಿಯಮಗಳ ಜಾರಿಗೆ ಸಂಬಂಧಪಟ್ಟ ಸಾರ್ವಜನಿಕ ಸದಸ್ಯ ಪ್ರತಿನಿಧಿನಿಂದ ಅಥವಾ ಪರ್ಯಾಯಲೋಚನೆಗೆ ಇರುವ ವ್ಯವಸ್ಥೆಯ ವಿವರ
  • ಮಂಡಳಿ, ಸಭೆ, ಪರಿಷತ್ತು ಅಥವಾ ಬೇರೆ ಸಮಿತಿಗಳ ವರದ.
  • ಅಧಿಕಾರಿ ಹಾಗೂ ನೌಕರರ ನಾಮಸ್ಥಾನ ನಿರ್ದೇಶಕ ಪುಸ್ತಕ
  • ನಿಯಮಾನುಸಾರ, ಪರಿಹಾರವನ್ನೊಳಗೊಂಡು ಪ್ರತಿ ಅಧಿಕಾರಿ ಹಾಗೂ ನೌಕರರು ಪಡೆಯುತ್ತಿರುವ ತಿಂಗಳ ಸಂಭಾವನೆ.
  • ಸಹಾಯಧನ ಕಾರ್ಯಕ್ರಮ ಅನುಷ್ಠಾನಗೊಂಡ ರೀತಿ.
  • ರಿಯಾಯಿತಿ ಪಡೆದವರ ವಿವರ, ಮಿತಿ ಅಥವಾ ಧನಸಹಾಯದ ಅಧಿಕಾರ ಎಲೆಕ್ಟ್ರಾನಿಕ್ ರೀತಿಯಲ್ಲಿ ದೊರೆಯುವ ಮಾಹಿತಿ.
  • ಮಾಹಿತಿ ಪಡೆಯಲು ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ವಿವರ.
  • ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಪಟ್ಟಿ.

ಮಾಹಿತಿ ಹಕ್ಕಿನ ಅಧಿಕಾರ ತಿಳಿಯಿರಿ

ಮಾಹಿತಿ ಹಕ್ಕು 2005, ಸಾರ್ವಜನಿಕ ಅಧಿಕಾರ ನಿಯಂತ್ರಣದಡಿಯಲ್ಲಿ ಬರುವ ಸಾರ್ವಜನಿಕರಿಗೆ ಮಾಹಿತಿ ಪಡೆಯಲು ಪ್ರಯೋಗಾತ್ಮಕ ಚೌಕಟ್ಟನ್ನು ಸಿದ್ದಪಡಿಸಿದೆ. ಇದರಿಂದ ಎಲ್ಲಾ ಸಾರ್ವಜನಿಕರ ಪ್ರಾಧಿಕಾರಗಳಲ್ಲಿ ಪಾರದರ್ಶತೆ ಹಾಗೂ ಪ್ರಮಾಣಿಕತೆ ಉತ್ತೇಜನಗೊಳ್ಳುತ್ತದೆ.

ಮಾಹಿತಿ ಹಕ್ಕು ಯಾವಾಗ ಜಾರಿಗೆ ಬಂತು?

ಕೇಂದ್ರ ಮಾಹಿತಿ ಹಕ್ಕು 12.10.2005ಕ್ಕೆ ಜಾರಿಗೆ ಬಂತು. ಆದರೆ ಅದಕ್ಕಿಂತ ಮುಂಚಿತವಾಗಿ 9ರಾಜ್ಯ ಸರ್ಕಾರಗಳು ಈ ಕಾಯಿದೆಯನ್ನು ರಾಜ್ಯದಲ್ಲಿ ಬಿಡುಗಡೆ ಮಾಡಿದವು. ಆ ರಾಜ್ಯಗಳು ಜಮ್ಮು, ಕಾಶ್ಮೀರ, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ,ಕರ್ನಾಟಕ, ತಮಿಳುನಾಡು, ಅಸ್ಸಾಂ ಮತ್ತು ಗೋವಾ.

ಈ ಹಕ್ಕು ನೀಡುವುದಕ್ಕೆ ನಮಗೆ ಕಾಯಿದೆ ಯಾಕೆ ಬೇಕು?

ಏಕೆಂದರೆ, ಯಾವುದಾದರೂ ಸಕರ್ಾರಿ ಇಲಾಖೆಗೆ ಹೋಗಿ, ಅಲ್ಲಿಯ ಅಧಿಕಾರಿಯನ್ನು ಮಾಹಿತಿ ಹಕ್ಕು ನನ್ನ ಮೂಲಭೂತ ಹಕ್ಕು. ನಾನು ಈ ದೇಶದ ಯಜಮಾನ, ದಯವಿಟ್ಟು ನನಗೆ ಎಲ್ಲಾ ಕಡತಗಳನ್ನು ತೋರಿಸಿ ಅವರು ನೀಡುತ್ತಿರಲಿಲ್ಲ ಜೊತೆಗೆ ನಿಮ್ಮನ್ನು ಕೊಠಡಿಯಿಂದ ಹೊರ ಹಾಕುವ ಎಲ್ಲಾ ಸಾಧ್ಯತೆಗಳು ಇರುತ್ತಿದ್ದವು. ಆದ್ದರಿಂದ ಯಾವುದಾದರೊಂದು ಪದ್ಧತಿ ಇಲ್ಲವೆ ನಿಯಮದ ಮೂಲಕ ಈ ಹಕ್ಕುನ್ನು ಬಳಸಬೇಕಾಯಿತು. 13.10.2005 ರಂದು ಜಾರಿಗೆ ಬಂತು. ಮಾಹಿತಿ ಹಕ್ಕು 2005 ನಮಗೆ ಯಾವ ಹೊಸ ಹಕ್ಕನ್ನು ನೀಡಿಲ್ಲ. ಮಾಹಿತಿಗಾಗಿ ಅರ್ಜಿ ಹೇಗೆ ಸಲ್ಲಿಸಬೇಕು, ಎಲ್ಲಿ ಸಲ್ಲಿಸಬೇಕು. ಎಷ್ಟು ಶುಲ್ಕ ಇತ್ಯಾದಿ ಪ್ರಕ್ರಿಯೆಗಳನ್ನು ತೋರಿಸಿದೆ.

ಮಾಹಿತಿ ಹಕ್ಕು 2005ರಲ್ಲಿ ಯಾವ ಯಾವ ಹಕ್ಕುಗಳು ದೊರೆಯುತ್ತವೆ?

  • ಸರ್ಕಾರವನ್ನು ಯಾವ ಪ್ರಶ್ನೆಯನ್ನಾದರೂ ಕೇಳಬಹುದು ಅಥವಾ ಯಾವ ಮಾಹಿತಿಯನ್ನಾದರೂ ಪಡೆಯಬಹುದು.
  • ಸರ್ಕಾರದ ಯಾವುದೇ ದಾಖಲೆಗಳ ಪ್ರತಿ ಪಡೆಯಬಹುದು.
  • ಸರ್ಕಾರದ ಯಾವುದೇ ದಾಖಲೆಗಳನ್ನು ತಪಾಸಣೆ ಮಾಡಬಹುದು. ಸರ್ಕಾರದ ಯಾವುದೇ ಕೆಲಸಗಳನ್ನು ತಪಾಸಣೆ ಮಾಡಬಹುದು.
  • ಯಾವುದೇ ಸರ್ಕಾರೀ ಕೆಲಸದ ವಸ್ತುಗಳ ಮಾದರಿ ಪಡೆಯಬಹುದು.

ಮಾಹಿತಿ ಹಕ್ಕು ಯಾರನ್ನೆಲ್ಲಾ ಪಸರಿಸಿದೆ.

ಜಮ್ಮು ಮತ್ತು ಕಾಶ್ಮೀರ ಹೊರತು ಪಡಿಸಿ, ಈ ಕಾಯಿದೆಯಾಡಿ ಭಾರತ ದೇಶವನ್ನು ಪಸರಿಸಿದೆ. ಸಂವಿಧಾನದಡಿಯಲ್ಲಿ ರಚಿಸಲ್ಪಟ್ಟಿರುವ ಯಾವುದೇ ಕಾಯಿದೆ ಅಥವಾ ಸರ್ಕಾರದ ಘೋಷಣೆಯಡಿಯಲ್ಲಿ ಬರುವ ಸಕರ್ಾರೇತರ ಸಂಸ್ಥೆಗಳು, ಸಕರ್ಾರದ ಹಿಡಿತದಲ್ಲಿರುವ ಅಥವಾ ಸರ್ಕಾರದಿಂದ ಸಹಾಯಧನ ಪಡೆಯುವ ಎಲ್ಲಾ ಸಂಸ್ಥೆಗಳ ಇದರೊಳನೊಳಗೊಂಡಿದೆ.

ಯಾರು ನಿಮಗೆ ಮಾಹಿತಿ ನೀಡುತ್ತಾರೆ?

ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಒಬ್ಬರು ಅಥವಾ ಹೆಚ್ಚು ಪ್ರಸ್ತುತ ಅಧಿಕಾರಿಗಳನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಎಂದು ನೇಮಿಸುತ್ತಾರೆ. PIO’s act like nodal officers. ನಿಮ್ಮ ಅರ್ಜಿಯನ್ನು ಅವರಿಗೆ ಸಲ್ಲಿಸಬೇಕು. ಇಲಾಖೆಯ ಬೇರೆ ಬೇರೆ ವಿಭಾಗಗಳಿಂದ ಮಾಹಿತಿ ಸಂಗ್ರಹಿಸಿ ನಿಮಗೆ ನೀಡುವುದು ಅವರ ಕರ್ತವ್ಯ. ಇದರ ಜೊತೆಗೆ ಕೆಲವು ಅಧಿಕಾರಿಗಳನ್ನು ಸಹಾಯಕ ಮಾಹಿತಿ ಅಧಿಕಾರಿ ಎಂದು ನೇಮಿಸಲಾಗುವುದು. ಇವರು ನಿಮ್ಮಿಂದ ಅರ್ಜಿ ಪಡೆದು ಅದನ್ನು PIO ಗೆ ಒತ್ತಾಸೆಗೂಡುವುದು ಅವರ ಕರ್ತವ್ಯವಾಗಿರುತ್ತದೆ.

ನಿಮ್ಮ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ನೀವು ಇದನ್ನು PIO ಅಥವಾ APIO ಗಳಲ್ಲಿ ನೀಡಬಹುದು. ಕೇಂದ್ರ ಸರ್ಕಾರಿ ಇಲಾಖೆಗಳ ವಿಷಯಕ್ಕೆ ಬಂದರೆ, 629 ಅಂಚೆ ಕಛೇರಿಗಳನ್ನು APO ಎಂದು ಪರಿಗಣಿಸಲಾಗಿದೆ. ಇಂತಹ ಯಾವುದೇ ಅಂಚೆ ಕಛೇರಿಗಳನ್ನು ಎಂದು ಪರಿಗಣಿಸಲಾಗಿದೆ. ಇಂತಹ ಯಾವುದೇ ಕಛೇರಿಯಲ್ಲಿ ಮಾಹಿತಿ ಹಕ್ಕು ಕೌಂಟರ್ಗಳಲ್ಲಿ ಅರ್ಜಿ ಹಾಗೂ ಶುಲ್ಕ ಪಾವತಿಸಬಹುದು. ಅವರು ನಿಮಗೆ ರಸೀತಿ ಹಾಗೂ ಸ್ವೀಕೃತಿಯನ್ನು ನೀಡುತ್ತಾರೆ. ಮತ್ತು ಅದನ್ನು ಸೂಕ್ತವಾದ, ಸಂಬಂಧಪಟ್ಟ PIO ಗೆ ರವಾನಿಸುವುದು ಅವರ ಜವಾಬ್ದಾರಿ.

ನೀವು ಹೇಗೆ ಶುಲ್ಕ ಪಾವತಿಸಬೇಕು?

ಹೌದು, ಅರ್ಜಿ ಶುಲ್ಕವಿರುತ್ತದೆ. ಎಲ್ಲಾ ಕೇಂದ್ರ ಸರ್ಕಾರಿ ಇಲಾಖೆಗಳಿಗೆ ರೂ. 10/-. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ನಿಗದಿತ ಬೆಲೆ ಬೇರೆ ಇರುತ್ತದೆ. ಹೆಚ್ಚಿನ ವಿವರಗಳಿಗಾಗಿ ಇದರ ತಿಜಛಣಜ ನಲ್ಲಿ ರಾಜ್ಯ ಸಕರ್ಾರ ನೀಡಿರುವ ಚೌಕಟ್ಟು ನೋಡಬಹುದು. ಮಾಹಿತಿ ಪಡೆಯಲು, ಕೇಂದ್ರ ಸಕರ್ಾರಿ ಕಛೇರಿಯಿಂದ ದೊರೆತ ಮಾಹಿತಿ 1ಹಾಳೆಗೆ ರೂ. 2/- ಇರುತ್ತದೆ. ಬೇರೆ ರಾಜ್ಯಗಳಿಗೆ ನಿಗದಿತ ಬೆಲೆ ಬೇರೆ. ಅದೇ ರೀತಿ ದಾಖಲೆ ತಪಾಸಣೆಗೆ ಒಂದು ಗಂಟೆಗೆ ರೂ.5/- ನೀಡಬೇಕು. ಇದು ಕೇಂದ್ರ ಸರ್ಕಾರದ ಕಾನೂನು ಪ್ರಕಾರ ಬೇರೆ ಬೇರೆ ರಾಜ್ಯಗಳಿಗೆ ಆಯಾಯ ರಾಜ್ಯದ ಕಾನೂನು ನೋಡಿ ಶುಲ್ಕವನ್ನು ನಗದು ರೂಪದಲ್ಲಿ ಇಲ್ಲವೆ ಡಿ.ಡಿ. ಮುಖಾಂತರ ಚೆಕ್ ಮೂಲಕ ಇಲ್ಲವೆ ಪೋಸ್ಟಲ್ ಆರ್ಡರ್ ಮೂಲಕ ಸಾರ್ವಜನಿಕ ಪ್ರಾಧಿಕಾರದ ಪರವಾಗಿ ಪಡೆಯಬಹುದು. ಕೆಲವು ರಾಜ್ಯಗಳಲ್ಲಿ ನ್ಯಾಯಾಲಯದ ಸ್ಟಾಂಪ್ನ್ನು ಅರ್ಜಿಯೊಂದಿಗೆ ಲಗತ್ತಿಸಬಹುದು. ಇದು ನೀವು ಶುಲ್ಕ ನೀಡಿದ ರೀತಿಯೇ ಆಗುತ್ತದೆ. ನಂತರ ಅರ್ಜಿಯನ್ನು ಅಂಚೆ ಅಥವಾ ಕೈಯಿಂದ ಕೊಡಬಹುದು.

ಅಂಚೆ ಮೂಲಕ ಕಳುಹಿಸಬಹುದು. ವಿದ್ಯುಕ್ತವಾಗಿ ಪರಿಚ್ಛೇದ 18ರ ಅಡಿಯಲ್ಲಿ, ದೂರನ್ನು ಸಂಬಂಧಪಟ್ಟ ಮಾಹಿತಿ ಆಯುಕ್ತರಿಗೆ ಕಳುಹಿಸಬಹುದು. ನಿಮ್ಮ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಅಧಿಕಾರಿಗೆ 25,000/- ದಂಡ ಹಾಕುವ ಅಧಿಕಾರ ಮಾಹಿತಿ ಆಯುಕ್ತರಿಗೆ ಇರುತ್ತದೆ.

ಮಾಹಿತಿ ಪಡೆಯಲು ಯಾವುದಾದರೂ ಅರ್ಜಿ ನಮೂನೆ ಇದೆಯೇ ?

ಕೇಂದ್ರ ಸರ್ಕಾರ ಇಲಾಖೆಗಳಿಗೆ ಅರ್ಜಿ ನಮೂನೆ ಇರುವುದಿಲ್ಲ. ಮಾಮೂಲು ಅರ್ಜಿಯಂತೆ ಖಾಲಿ ಹಾಳೆಯಲ್ಲಿ ಬರೆದು ಸಲ್ಲಿಸಬೇಕು. ಆದರೆ, ಕೆಲವು ರಾಜ್ಯ, ಸಚಿವಾಲಯ ಹಾಗೂ ಇಲಾಖೆಗಳಲ್ಲಿ ನಿರ್ಧಿಷ್ಟ ನಮೂನೆ ಇರುತ್ತದೆ. ಅಂತಹ ನಮೂನೆಯಲ್ಲಿ ಸಲ್ಲಿಸಬೇಕು. ದಯವಿಟ್ಟು ಬೇರೆ ಬೇರೆ ರಾಜ್ಯಗಳ ನಿಯಮಗಳನ್ನು ತಿಳಿಯಿರಿ.

ಮಾಹಿತಿಗಾಗಿ ಅರ್ಜಿ ಹೇಗೆ ಸಲ್ಲಿಸಬೇಕು?

ಮಾಮೂಲಿ ಹಾಳೆಯಲ್ಲಿ ಅರ್ಜಿಯನ್ನು ಬರೆದು ಖುದ್ದಾಗಿ ಇಲ್ಲವೆ ಅಂಚೆ ಮೂಲಕ ಮಾಹಿತಿ ಅಧಿಕಾರಿಗೆ ಕಳುಹಿಸಿ ಒಂದು ಪ್ರತಿ ನಿಮ್ಮ ಉಲ್ಲೇಖಗಾಗಿ ನಿಮ್ಮೊಂದಿಗೆ ಇಟ್ಟುಕೊಳ್ಳಲು ಮರೆಯಬೇಡಿ.

ಅರ್ಜಿ ಶುಲ್ಕವನ್ನು ಹೇಗೆ ಪಾವತಿಸಬೇಕು?

ಅರ್ಜಿ ಶುಲ್ಕ ಪಾವತಿಸಲು, ಪ್ರತಿ ರಾಜ್ಯಕ್ಕೂ ಬೇರೆ ನಿಯಮವಿದೆ. ಸಾಮಾನ್ಯವಾಗಿ,ಅರ್ಜಿ ಶುಲ್ಕವನ್ನು ಕೆಳಗಿನ ಯಾವುದಾದರೊಂದು ರೂಪದಲ್ಲಿ ಪಾವತಿಸಬಹುದು.

  • ಖುದ್ದಾಗಿ ನಗದು (ಜ್ಞಾಪಕವಾಗಿ ರಸೀತಿ ಪಡೆಯಿರಿ)
  • ಅಂಚೆ ಮೂಲಕ
  • ಡಿ.ಡಿ
  • ಐ.ಪಿ.ಓ
  • ಎಂ.ಓ
  • ಕೋರ್ಟ್ ಶುಲ್ಕ ಚೀಟಿ
  • ಚೆಕ್

ಇತ್ತೀಚಿನ ನವೀಕರಣ​ : 23-02-2023 01:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಮನಗರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080